
ಯು.ಎನ್ ನ ಸೆಕ್ಯೂರಿಟಿ ಕೌನ್ಸಿಲ್ನ ಕೌಂಟರ್ ಭಯೋತ್ಪಾದನಾ ಸಮಿತಿಯ ಮುಖ್ಯಸ್ಥ ಅಮರ್ ಅಬ್ದೆಲ್ಲತಿಫ್ ಅಬೌಲಟ್ಟಾ ಅವರಿಗೆ ಪತ್ರ ಬರೆದಿರುವ ಭಾರತದ ಮುಸ್ಲಿಮರು, ಪ್ರಧಾನ ಮಂತ್ರಿಯ ಕಚೇರಿ (ಪಿಎಂಒ) ಗೆ ಆ ಪತ್ರದ ಪ್ರತಿಯನ್ನು ಕಳುಸಿಸಿದ್ದಾರೆ. "ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆಗಳು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ, ಅವರು ಭಾರತವನ್ನು ನಂಬರ್ ಒನ್ ಶತ್ರು ಎನ್ನುತ್ತಾರೆ ಆದರೆ ನಿಜವಾಗಿ ಅವರು ಇಸ್ಲಾಂ ಮತ್ತು ಮಾನವೀಯತೆಯ ಶತ್ರು" ಎಂದು ಮುಂಬೈ ಮೂಲದ ಸಮಾಜಿಕ ಸಂಸ್ಥೆ ಇಸ್ಲಾಮಿಕ್ ಡಿಫೆನ್ಸ್ ಸೈಬರ್ ಸೆಲ್, ಡಾ ಅಬ್ದುರ್ ರಹಮಾನ್ ಅಂಜರಿಯಾ ಹೇಳಿದರು.