
ಕೊರೊನಾ ಬಂದು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆಯಾದಾಗಿನಿಂದ ಕನ್ನಡ ಚಿತ್ರಪ್ರೇಮಿಗಳಿಗೆ ತಮ್ಮ ನೆಚ್ಚಿನ ಚಿತ್ರಗಳನ್ನು ತೆರೆಮೇಲೆ ನೋಡಲು ಅವಕಾಶ ವಿಲ್ಲದೆ ಎಲ್ಲರೂ ಕಂಗಾಲಾಗಿದ್ದರೆ, ಒನ್ಲೈನ್ ಮೂಲಕ ಚಿತ್ರ ಬಿಡುಗಡೆಗೆ ಯಾವುದೇ ತೊಂದರೆಯಾಗಿಲ್ಲ. ಹಲವಾರು ಚಿತ್ರಗಳು ಒ.ಟಿ.ಟಿ ಮೂಲಕ ಎಲ್ಲರ ಮೊಬೈಲ್ಗೆ ಡೈರೆಕ್ಟ್ ಬಂದು ಜನರನ್ನು ರಂಜಿಸಿದೆ.
ಕನ್ನಡದ ಅಭಿಮಾನಿಗಳೆಲ್ಲಾ ಇ ವರದಿಯನ್ನು ಶೇರ್ ಮಾಡಿ ಕನ್ನಡ ಚಿತ್ರಗಳು ಎಲ್ಲಾ ಅಭಿಮಾನಿಗಳನ್ನು ತಲುಪಲು ಸಹಾಯ ಮಾಡಿ.
ಕನ್ನಡದ ಅಭಿಮಾನಿಗಳೆಲ್ಲಾ ಇ ವರದಿಯನ್ನು ಶೇರ್ ಮಾಡಿ ಕನ್ನಡ ಚಿತ್ರಗಳು ಎಲ್ಲಾ ಅಭಿಮಾನಿಗಳನ್ನು ತಲುಪಲು ಸಹಾಯ ಮಾಡಿ.
ಈದೀಗ ಇನ್ನೂ ಕೆಲವು ಚಿತ್ರಗಳೂ ಒ.ಟಿ.ಟಿ ಮೂಲಕ ತೆರೆಗೆ ಬರಲು ಸಿದ್ಧವಾಗಿದೆ.
೧. ಹವಾಲ
ಕೋವಿಡ್ -19 ಲಾಕ್ಡೌನ್ ಸಿನೆಮಾ ಉದ್ಯಮಕ್ಕೆ ದೊಡ್ಡ ಹೊಡೆತವನ್ನು ಉಂಟುಮಾಡಿದರೂ; ಚಲನಚಿತ್ರ ನಿರ್ಮಾಪಕರ ಉತ್ಸಾಹವು ಯಾವುದೇ ಪರಿಣಾಮ ಬೀರಿಲ್ಲ. da ಹವಾಲಾ ನಿರ್ಮಾಣವಾಗಿದ್ದು, ಜುಲೈ 31 ರಂದು ಏಕಕಾಲದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ವಿಶ್ವ ಪ್ರೀಮಿಯರ್ನಲ್ಲಿ ಪ್ರದರ್ಶನಗೊಳ್ಳಲಿದೆ.
ಹವಾಲ ಚಿತ್ರವನ್ನು ಪ್ರವೀಣ್ ಶೆಟ್ಟಿ ಪುತ್ತೂರು ಸೋಚ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ನಿರ್ಮಿಸಿದ್ದಾರೆ. ಚಲನಚಿತ್ರವು ಭೂಗತ ಲೋಕದ ಅಪರಾಧಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಪ್ರಸಿದ್ಧ ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ನಟಿಸಿದ್ದ ಅಮಿತ್ ರಾವ್ ನಿರ್ದೇಶಿಸಿದ ಮೊದಲ ಚಿತ್ರ ಇದಾಗಿದ್ದು, ಸಂಗೀತ ನಿರ್ದೇಶಕ ಕಿಶೋರ್ ಎಕ್ಸಾ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಹಾಡುಗಳನ್ನು ರಚಿಸಿದ್ದಾರೆ.
ಶ್ರೀನಿವಾಸ್ ಮತ್ತು ಅಮಿತ್ ರಾವ್, ಕಮಲಿ - ಟಿವಿ ಧಾರಾವಾಹಿ ಖ್ಯಾತ ನಟ ಅಮೂಲ್ಯ ಗೌಡ, ಟಿವಿ ಧಾರಾವಾಹಿ ನಟ ಸಹಾನ ಪೂಜಾರಿ ಮುಖ್ಯ ಪಾತ್ರದಲ್ಲಿದ್ದಾರೆ.
೨. ಮಾಯಾ ಕನ್ನಡಿ
ದುಬೈ ಮೂಲದ ವಿನೋದ್ ಪೂಜಾರಿ ನಿರ್ದೇಶಿಸಿರುವ 'ಮಾಯಾ ಕನ್ನಡಿ' ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆದರೆ ಕೊರೊನಾ ಕಾರಣದಿಂದ ಬೇಗನೇ ಚಿತ್ರಮಂದಿರಗಳಿಂದ ಎತ್ತಂಗಡಿ ಪಡೆದರೂ, ಅಭಿಮಾನಿಗಳು ಚಿತ್ರವನ್ನು ಒ.ಟಿ.ಟಿ ಮೂಲಕ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಚಿತ್ರ ಕೂಡಾ ಒ.ಟಿ.ಟಿ ಮೂಲಕ ಅಭಿಮಾನಿಗಳ ಮೊಬೈಲ್ ಮೂಲಕ ರಂಜಿಸಲಿದೆ.
ಮಾಯಾ ಕನ್ನಡಿ ಚಿತ್ರದಲ್ಲಿ ಪ್ರಭು ಮುಂಡ್ಕೂರು, ಕಾಜಲ್ ಕುಂದರ್ ಜೊತೆಗೆ 'ಗಟ್ಟಿಮೇಳ' ಧಾರಾವಾಹಿಯ ಆದ್ಯ ಪಾತ್ರದಾರಿ ಅನ್ವಿತ ಸಾಗರ್ ಪ್ರಮುಖ ಪಾತ್ರದಲ್ಲಿದ್ದಾರೆ. ಬ್ಲೂವೇಲ್ ಕಥೆ ಆದರಿತ ಈ ಚಿತ್ರ ಹಾಲಿವುಡ್ ಲೆವಲ್ಲಿನ ಥ್ರಿಲ್ಲರ್ ಆಗಿದೆ ಎನ್ನಲಾಗಿದೆ. ಕೆ. ಜಿ. ಎಫ್ ಚಿತ್ರದ ಸಂಕಲನಕಾರ ಶೀಕಾಂತ್ ಎಡಿಟ್ ಮಾಡಿರುವ ಟ್ರೇಲರ್ ಎಲ್ಲರ ಮನಗೆದ್ದಿತ್ತು.
ಮಾಯ ಕನ್ನಡಿ ಟ್ರೇಲರ್ । ಮಾಯಾ ಕನ್ನಡಿ ವಿಮರ್ಶೆ
ಮಾಯ ಕನ್ನಡಿ ಟ್ರೇಲರ್ । ಮಾಯಾ ಕನ್ನಡಿ ವಿಮರ್ಶೆ
೩. ಫ್ರೆಂಚ್ ಬಿರಿಯಾನಿ
ಫ್ರೆಂಚ್ ಬಿರಿಯಾನಿ ಮುಂಬರುವ ಕನ್ನಡ ಭಾಷೆಯ ಹಾಸ್ಯ ಚಿತ್ರವಾಗಿದ್ದು, ಪನ್ನಗ ಭರಣ ನಿರ್ದೇಶನದಲ್ಲಿ ಮತ್ತು ಡ್ಯಾನಿಶ್ ಸೈಟ್ ಮತ್ತು ಸಾಲ್ ಯೂಸುಫ್ ನಟಿಸಿದ್ದಾರೆ. ಈ ಚಿತ್ರವನ್ನು ಪಿಆರ್ಕೆ ಪ್ರೊಡಕ್ಷನ್ಸ್ನ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಗುರುದಾತ್ ಎ. ತಲ್ವಾರ್ ನಿರ್ಮಿಸಿದ್ದಾರೆ.
ಈ ಚಿತ್ರವು 2019 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿ ನಲವತ್ತು ದಿನಗಳಲ್ಲಿ ಶೂಟಿಂಗ್ ಮುಗಿಸಿತು. ಚಿತ್ರದ ಕಥಾವಸ್ತುವು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದಾಗ ಪನ್ನಗ ಭರಣ ಅವರ ಪ್ರಯಾಣವನ್ನು ಆಧರಿಸಿದೆ. ಭರಣ ಚೈನ್ನೈಗೆ ಬಂದಾಗ, ಅವರನ್ನು ಹಲವಾರು ಆಟೋ ಚಾಲಕರು ಸಂಪರ್ಕಿಸಿದರು, ಅವರು ಅವರನ್ನು ಸಣ್ಣ ಅಲ್ಲೆವೇಗಳ ಮೂಲಕ ಕರೆದೊಯ್ದರು. ಈ ಚಿತ್ರವು ಶಿವಾಜಿ ನಗರದಿಂದ (ಡ್ಯಾನಿಶ್ ಸೈಟ್ ನಿರ್ವಹಿಸಿದ) ಆಟೋ ಡ್ರೈವರ್ ಮತ್ತು ಫ್ರೆಂಚ್ ವಲಸಿಗ (ಸಾಲ್ ಯೂಸುಫ್ ನಿರ್ವಹಿಸಿದ) ನಡುವೆ ಬೆಂಗಳೂರಿಗೆ ಭೇಟಿ ನೀಡಿದ ಮೂರು ದಿನಗಳ ಪ್ರವಾಸವಾಗಿದೆ. ಟಿಕ್ಟಾಕ್ ತಾರೆ ದಿಶಾ ಮದನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ವರದಿಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಟ್ರೇಲರ್ ಇಲ್ಲಿ ಕ್ಲಿಕ್ ಮಾಡಿ
ಚಿತ್ರದ ಟ್ರೇಲರ್ ಇಲ್ಲಿ ಕ್ಲಿಕ್ ಮಾಡಿ
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :