
ನವದೆಹಲಿ: ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ಆಮ್ಲಜನಕ ಸಿಲಿಂಡರ್ ಬದಲಿಗೆ ಅಗ್ನಿ ಶಾಮಕ ಉಪಕರಣವನ್ನು ಮಾರಾಟ ಮಾಡುವ ಮೂಲಕ ಮಹಿಳೆಗೆ ಮೋಸ ಮಾಡಿದ ಆರೋಪದ ಮೇಲೆ ಇಬ್ಬರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಪಡೆ ಅಭಿವೃದ್ಧಿ ಇಲಾಖೆ (ಡಿಡಬ್ಲ್ಯುಡಿ) ಮತ್ತು ಉತ್ತಮ್ ನಗರ ಪೊಲೀಸ್ ವಿಶೇಷ ಸಿಬ್ಬಂದಿ ಜಂಟಿ ತಂಡ ಈ ಬಂಧನವನ್ನು ಮಾಡಿದೆ ಎಂದು ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಮೀನಾ ಮಾಹಿತಿ ನೀಡಿದರು.
COVID-19 ಪ್ರಕರಣಗಳಲ್ಲಿ ದೇಶವು ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ, ಆಮ್ಲಜನಕದ ಬೇಡಿಕೆ ತರುವಾಯ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮಹಿಳೆಯನ್ನು ವಂಚಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿ, “ಬಿವಾಡಾಪುರದ ನಿವಾಸಿ ಗೀತಾ ಅರೋರಾ, ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಸಂಬಂಧಿಗೆ ಆಕ್ಸಿಜನ್ ಸಿಲಿಂಡರ್ ಖರೀದಿಸಿದ ನಂತರ ಅದನ್ನು ಪರೀಕ್ಷಿಸಿದಾಗ, ಅದು ಅಗ್ನಿಶಾಮಕ ಉಪಕರಣ ಎಂದು ತಿಳಿದು ಬಂದ ನಂತರ ಅವರು ಪೊಲೀಸರಿಗೆ ದೂರು ನೀಡಿದರು. "
ಪೊಲೀಸ್ ತಂಡ ಕಾಲ್ ಡಿಟೇಲ್ ರೆಕಾರ್ಡ್ (ಸಿಡಿಆರ್) ಸಹಾಯದಿಂದ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಐದು ಅಗ್ನಿಶಾಮಕ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಎಫ್ಐಆರ್ನಲ್ಲಿ ಹೆಸರಿಸಲಾದ ಆರೋಪಿಗಳು ವಿಕಾಸ್ ಪುರಿಯ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್.